Idu-NannaKavana
ನನ್ನ ಮನದ ಕದ ತಟ್ಟಿದ ಭಾವನೆಗಳ ಭವನ - ನನ್ನ ಕವನ
Wednesday, October 27, 2010
ನಿನ್ನ ಕಣ್ಣೋಟ
ನಿನ್ನ
ನೋಟದ
ಸ್ಪರ್ಶವು
ನನ್ನ
ಮನಸಿಗೆ
ತಗುಲಿದ
ಕ್ಷಣವು
ಏನೋ
ಹೇಳುತಿದೆ
ಹೃದಯವು
...
ಅಪ್ಪಳಿಸಿದ
ಅಲೆಗಳ
ತಂಪು
ಹೂವಿನ
ಕುಡಿಗಳ
ಕಂಪು
ಅರಿವಾಗುತಿದೆ
ಮನಸಿಗೆ
ಮೆಲ್ಲಗೆ
...
ಮತ್ತೇನೋ
ಅಡಗಿದೆ
ನಿನ್ನ
ಕಣ್ಣಲಿ
ನಾನರಿಯದ
ನೂರು
ಮಾತುಗಳು
ಅಲ್ಲಿ
ಬಿಡಿಸಿ
ಹೇಳಲು
ಸೋತೆ
ಈ
ಕವನದಲ್ಲಿ
...
Tuesday, October 12, 2010
ಮಳೆರಾಯ
ರವಿ ಮೂಡದ
ಬಾನಿನಲಿ
ಮಿಂಚಿನ ದೀಪವ
ಹಿಡಿದು,
ದಿಕ್ಕುಗಳ ಕದವನು
ಬಡಿದು,
ಧರೆಯನು ಹುಡುಕಿ ಬರುತಿದ್ದಾನೆ
ಮಳೆರಾಯನು
...
ಬಾನಾಡಿನಲಿ
ಗುಡುಗಿ,
ಕರಿ-ಮೋಡಗಳನು
ಕೂಗಿ,
ಧರೆಯನು
ಕಾಣಲು
ಬರುತಿದ್ದಾನೆ
ಮಳೆರಾಯನು
...
ಅಗಸವನ್ನೇ
ದಾಟುತ,
ಸಾಗರವನ್ನೇ
ಸುರಿಯುತ,
ಧರೆಯನು ಸೇರಲು ಬರುತಿದ್ದಾನೆ
ಮಳೆರಾಯನು...
Newer Posts
Older Posts
Home
Subscribe to:
Comments (Atom)