ಹೊತ್ತು ಉರಿದು ಸುಡಬೇಕು ಕಾಡು
ಕಾಳ್ಗಿಚ್ಚಿನ ತಣಿವು ತೀರಲು !
ಮೃದುವಾದರೂ, ಮಧುರವಾದರೂ
ಹಸಿರಾದರೂ, ಉಸಿರಾದರೂ
ಜ್ವಾಲೆಗಳ ಜಿಹ್ವೆ ಚಿಂತಿಸದು !
ಬೆಂಕಿಯಲಿ ಕರಗುವ ಕೂಗು ಕೇಳಿಸದು !!
ಪ್ರಕೃತಿಯ ದಯೆಯಿಲ್ಲದ ದುರ್ಭರ ಧರ್ಮ ...
ಉಕ್ಕಿ ಹರಿದು ನದಿಗಳು ಕೊಚ್ಚಿಹೋಗಬೇಕು ನಾಡು
ವರುಣನಿಗೆ ಕರುಣೆಯ ನೆನಪಾಗಲು !
ಮನುಕುಲವು ಮಸಣವಾದರೂ
ಜೀವರಾಶಿ ಒಂಟಿಯಾದರೂ
ಮುಗಿಲಿಗೆ ಸುದ್ಧಿ ಸೇರದು !
ಮಳೆರಾಯನ ನರ್ತನೆ ನಿಲ್ಲದು !!
ಪ್ರಕೃತಿಯ ದಯೆಯಿಲ್ಲದ ದುರ್ಭರ ಧರ್ಮ ...
