Sunday, September 29, 2013

ಅರುಣೋದಯ...


ಅರುಣನ ಉದಯವು 
ಕೆಂದಾವರೆ ಅರಳುವ ಸಮಯವು 
ಚಿಲಿಪಿಲಿ ಕೇಳಿದರೆ ಮಧುರವು 

ಮಂಜಿನ ಸೋನೆ 
ಮುಂಜಾನೆಯಲಿ ಸುರಿವಾಗ ತಣ್ಣನೆ 
ಕರಗಿತು ಮನಸಿನಲಿ ಬೇನೆ!  

ಹೊಸಬೆಳಕಿನ ಕಿರಣ 
ಹೊಂಗನಸಿನ ಮನನ 
                                   ಜೊತೆ ಸೇರಿದ ಪ್ರತೀದಿನ ನವ ನವೀನ ...