ಕೌಂತೇಯರ ಕಡೆ ಮಾಧವ
ನಡೆಸುವೆನಷ್ಟೇ ರಥವ; ಮಾಡೆನೆಂದ ಯುದ್ಧವ
ಉಳಿಸಿ-ಬೆಳೆಸುವೆನೆಂದ ಧರ್ಮವ
ಕೌರವರ ಕಡೆ ಶಾಂತನವ
ರೋಷದಿಂ ಮಾಡಿದ ಶಪಥವ
ಕೃಷ್ಣನ ಕೈಲಿ ಹಿಡಿಸುವೆನೆಂದ ಆಯುಧವ
ರಸಮಯವಾಯ್ತು ರಣರಂಗ ರೌರವ
ಶುರುವಾಯ್ತು ಭೀಷ್ಮ ಬಲಾನುಜರ ದ್ವಂದ್ವ
ಗಾಂಗೇಯ ಹರಿಸಿದ ಗಾಂಡೀವಿಯ ರಕ್ತವ
ಉಳಿಸಲು ಅರ್ಜುನನ ಪ್ರಾಣವ
ಕೊಲ್ಲುವೆನೆಂದು ಹಿಡಿದ ಕೃಷ್ಣ ರಥ ಚಕ್ರವ
ಮರೆತಿಹನೇ ಮಾಧವ !


































