ಖರದೂಷಣ, ಕುಂಭಕರ್ಣ
ಯಾರಾದರೇನು ಕೊನೆಗೆ ದಶಕಂಠ ರಾವಣ
ಮಣಿಸಿತು ಎಲ್ಲರನೂ ರಾಮನ ಬಾಣ
ಚಿನ್ನದ ಮನೆ; ಚಿಕ್ಕಮ್ಮನ ಮತ್ಸರದ ಯೋಚನೆ
ಒಂದೇನು? ಹೆಜ್ಜೆಗೊಂದು ಆಕರ್ಷಣೆ, ಅಡಚಣೆ !
ಸೋಲಿಲ್ಲ ! ಗುಣ ಪರೀಕ್ಷೆಯಲಿ ಗೆದ್ದವನು ರಾಮನೇ
ನಡೆ ನೀತಿ ಕಥನ ; ರೂಪವು ಪುಂಸಾ ಮೋಹನಕಾಮ ಕ್ರೋದಗಳ ಹೆಡೆ ಮುರಿದ ಆದರ್ಶ ಜೀವನ
ಲೋಕಕ್ಕೆ ಮತ್ತೂಮ್ಮೆ ತೋರಿದ ಹರಿಶ್ಚಂದ್ರನ
ರಾಮಾಯಣ ಎಂದರೆ ಸತ್ಯಂ ವದ ಧರ್ಮಂ ಚರಾ
ರಾಮ ರಾಜ್ಯವೆಂದರೆ ಧರ್ಮ ದೇವತೆಗೆ ತುಂಬು ಸಡಗರ
ಅದಕ್ಕೆ ಕಟ್ಟೇವು ಪ್ರತೀ ಊರಿನಲ್ಲಿ ನಾವು ರಾಮ ಮಂದಿರ
