ಉಕ್ಕಿ ಹರಿಯಲಿ ಛಲ,
ತುಂಬಿ ತುಳುಕಲಿ ಬಲ... ನಿನ್ನ ಮಕ್ಕಳಲ್ಲಿ!
ನರನಾಡಿಗೆ ಸೇರಲಿ ರೋಷ,
ದಿಕ್ಕು- ದಿಕ್ಕಿನಿಂದ ಕೇಳಲಿ ಜಯಘೋಷ... ನಿನ್ನ ದೇಶದಲ್ಲಿ!
ಗಂಗೆಯಂತಾ ನೂರು ನದಿಯಲ್ಲಿ,
ಕುಲ-ಮತವು ಕೊಚ್ಚಿಹೋಗಲಿ ...
ಸಾಸಿರ ಸೂರ್ಯರ ಬೆಳಕಿನಲ್ಲಿ,
ಬ್ರಷ್ಟತನಕೆ ಬೊಬ್ಬೆಯೇರಲಿ...
ಎಂಟೆದೆಯ ಬಂಟರು ಹುಟ್ಟಲಿ,
ಸಿರಿಯ ಹಿರಿಮೆಯಲ್ಲಿ ನೀನು ಬೆಳಗಲಿ...
ನಿನ್ನ ಕಣ್ಣೊರೆಸುವ ಕೈ ನನ್ನದಾಗಲಿ,
ಭಾರತಿ, ನಿನಗೆ ಜಯವಾಗಲಿ!
ತುಂಬಿ ತುಳುಕಲಿ ಬಲ... ನಿನ್ನ ಮಕ್ಕಳಲ್ಲಿ!
ನರನಾಡಿಗೆ ಸೇರಲಿ ರೋಷ,
ದಿಕ್ಕು- ದಿಕ್ಕಿನಿಂದ ಕೇಳಲಿ ಜಯಘೋಷ... ನಿನ್ನ ದೇಶದಲ್ಲಿ!
ಗಂಗೆಯಂತಾ ನೂರು ನದಿಯಲ್ಲಿ,
ಕುಲ-ಮತವು ಕೊಚ್ಚಿಹೋಗಲಿ ...
ಸಾಸಿರ ಸೂರ್ಯರ ಬೆಳಕಿನಲ್ಲಿ,
ಬ್ರಷ್ಟತನಕೆ ಬೊಬ್ಬೆಯೇರಲಿ...
ಎಂಟೆದೆಯ ಬಂಟರು ಹುಟ್ಟಲಿ,
ಸಿರಿಯ ಹಿರಿಮೆಯಲ್ಲಿ ನೀನು ಬೆಳಗಲಿ...
ನಿನ್ನ ಕಣ್ಣೊರೆಸುವ ಕೈ ನನ್ನದಾಗಲಿ,
ಭಾರತಿ, ನಿನಗೆ ಜಯವಾಗಲಿ!
