Monday, November 14, 2011

ಆತ್ಮಹತ್ಯೆ!

ನೊಂದಿರುವೆ ನೀನು
ಕಹಿಯಲೆ ಬೆಂದಿರುವೆ ನೀನು
ಕ್ಷಣಕಾಲ ಪಡೆ ನೀ ತಾಳ್ಮೆಯನು
ಮನವೆ ದುಡುಕಬೇಡ ನೀನು ....!


ಕಣ್ಣೀರಲೆ ಹರಿಸಿಬಿಡು ನಿನ್ನ ನೋವನು

ನಿನ್ನವರಲಿ ಹಂಚಿಕೊ ವ್ಯಥೆಯನು
ಮೌನವಾಗಿ ಕಳೆದುಬಿಡು ಸಮಯವನು
ಮನವೆ ದುಡುಕಬೇಡ ನೀನು ....!


ಬಾನಿನ ರವಿಯು ಬಾಡನು

ನಿನಗಾಗಿಯೆ ಒಮ್ಮೆ ಮೂಡುವನು
ಛಲದಿಂದ ಅಪ್ಪಿಕೊ
ಕ್ಷಣವನು
ಮನವೆ ದುಡುಕಬೇಡ ನೀನು ....!


ಬದುಕೊಂದು ವರ ಭೂಮಿಯ ಮೇಲೆ ...

3 comments: