Sunday, September 29, 2013

ಅರುಣೋದಯ...


ಅರುಣನ ಉದಯವು 
ಕೆಂದಾವರೆ ಅರಳುವ ಸಮಯವು 
ಚಿಲಿಪಿಲಿ ಕೇಳಿದರೆ ಮಧುರವು 

ಮಂಜಿನ ಸೋನೆ 
ಮುಂಜಾನೆಯಲಿ ಸುರಿವಾಗ ತಣ್ಣನೆ 
ಕರಗಿತು ಮನಸಿನಲಿ ಬೇನೆ!  

ಹೊಸಬೆಳಕಿನ ಕಿರಣ 
ಹೊಂಗನಸಿನ ಮನನ 
                                   ಜೊತೆ ಸೇರಿದ ಪ್ರತೀದಿನ ನವ ನವೀನ ... 

 

No comments:

Post a Comment