Monday, September 8, 2014

ದುರ್ಭರ ಧರ್ಮ !


ಹೊತ್ತು ಉರಿದು ಸುಡಬೇಕು ಕಾಡು 
ಕಾಳ್ಗಿಚ್ಚಿನ ತಣಿವು ತೀರಲು !

ಮೃದುವಾದರೂ, ಮಧುರವಾದರೂ 
ಹಸಿರಾದರೂ, ಉಸಿರಾದರೂ 
ಜ್ವಾಲೆಗಳ ಜಿಹ್ವೆ ಚಿಂತಿಸದು !
ಬೆಂಕಿಯಲಿ ಕರಗುವ ಕೂಗು ಕೇಳಿಸದು !!

ಪ್ರಕೃತಿಯ ದಯೆಯಿಲ್ಲದ ದುರ್ಭರ ಧರ್ಮ ... 

ಉಕ್ಕಿ ಹರಿದು ನದಿಗಳು ಕೊಚ್ಚಿಹೋಗಬೇಕು ನಾಡು 
ವರುಣನಿಗೆ ಕರುಣೆಯ ನೆನಪಾಗಲು !

ಮನುಕುಲವು ಮಸಣವಾದರೂ
ಜೀವರಾಶಿ ಒಂಟಿಯಾದರೂ 
ಮುಗಿಲಿಗೆ ಸುದ್ಧಿ ಸೇರದು !
ಮಳೆರಾಯನ ನರ್ತನೆ ನಿಲ್ಲದು !!

ಪ್ರಕೃತಿಯ ದಯೆಯಿಲ್ಲದ ದುರ್ಭರ ಧರ್ಮ ... 



No comments:

Post a Comment