Friday, March 27, 2015

ಸುಂದರಕಾಂಡ

ಅಲ್ಲೊಂದು ಲಂಕಾಪುರಿ ಸಾಗರದಲ್ಲಿ 
ಅಸುರ ವೀರ ರಾವಣ ರಾಜನಲ್ಲಿ
ಕದ್ದ ಸೀತೆ ಅಶೋಕ ವನದಲ್ಲಿ... 

ಸೀತೆಯನು ಹುಡುಕುತ ಹೊರಟರು
ಹಲವು ದಿಕ್ಕಿನಲಿ ರಾಮ ಧೂತರು
ವೀರ ಹನುಮನ ಹಾಡಿ ಹೊಗಳಿದರು ...

ಸಾಗರ ದಾಟಿ ಲಂಕೆಯ ಸೇರಿದ
ಅಶೋಕ ವನದಲ್ಲಿ ಸೀತೆಯ ನೋಡಿದ
ಸೀತೆಯ ಕಂಬನಿ ನೋಡಿ ಕಡು ನೊಂದ ...

ರಾಮನ ಉಂಗುರ ಸೀತೆಯ ಕೈಗೆ
ಸೀತೆಯ ಒಡವೆ ರಾಮನ ಕೈಗೆ
ಸೇರಿಸಿ; ಹಬ್ಬವ ತಂದ ಅವರಿಬ್ಬರ ಮನಸಿಗೆ ...

ಸೀತೆಯಿಂದ ಮೆಚ್ಚುಗೆಯ ಪಡೆದುಕೊಂಡ
ಅತಿಯಾಗಿ ನಲಿದ ರಾಮನು ಅಪ್ಪಿಕೊಂಡ
ಅದಕೇ ಇದು ಸುಂದರಕಾಂಡ ... 

1 comment: